Posts

Tulunadu Style Cucumber-Toor Dal Sambar

Cucumber Toor Dal Sambar Recipe Ingredients: 6 dried red chillies (adjust for spiciness) 1 teaspoon coriander seeds 1/2 teaspoon mustard seeds 1/2 teaspoon cumin seeds Small piece of tamarind 1 small onion 2-3 garlic cloves 1 cup toor dal (pigeon peas) 1-2 cups chopped cucumber Salt to taste Water as needed Oil for cooking Steps: 1. Soak tamarind in warm water for 10 minutes. 2. Grind red chillies, coriander seeds, mustard seeds, cumin seeds, tamarind, onion, and garlic into a smooth paste. 3. Cook the toor dal until soft. 4. Add chopped cucumber to the cooked dal and cook until tender. 5. Add the ground spice paste (masala) to the dal and cucumber mixture. 6. Add salt and simmer for 5-10 minutes until all flavors combine. 7. Serve hot with rice or as you like. Uses 1. Main dish with rice: Serve it hot with steamed rice for a wholesome meal. 2. Side dish: Goes well as a side with dosa, idli, or chapati. 3. Healthy option: Light and nutritious, good for digestion and hydration because o...

ದೂರದ ಅಭಿಲಾಷೆಯಿಂದ, ಇರುವುದುನು ಮರೆತೇವಾ?

Image
 ಎಷ್ಟು ವಿಚಿತ್ರ ಅಲ್ವಾ! ನಾವು ದಿನಚರಿಯಲ್ಲೇ ವಿಶ್ರಾಂತಿಗಾಗಿ ಮಾಲ್ಡೀವ್ಸ್, ಮಲ್ಲಿಗೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೋಗುತ್ತಿದ್ದೇವೆ. ಆದರೆ ಒಂದು ಅಡಿ ದೂರದಲ್ಲಿರುವ ನಮ್ಮ ಮನೆಯ ಅಂಗಳದಲ್ಲೇ ಇರುವ ಪ್ರಕೃತಿಯ ಸೌಂದರ್ಯವನ್ನಾದರೂ ನೋಡಿದ್ದೇವಾ? ಬಾಲ್ಯದಲ್ಲಿ ಓಡಿದ ಜಾಗವನ್ನೆಲ್ಲ ಮರೆತುಬಿಟ್ಟಿದ್ದೇವೆ. ಆಗ ನಡೆದ ದಾರಿಯನ್ನು ಮರೆತುಹೋಗಿದ್ದೇವೆ. ವಾಹನಗಳಲ್ಲಿ ಓಡುತ್ತಾ ನಾವು ನಡೆವುದನ್ನೇ ಮರೆತುಬಿಟ್ಟಿದ್ದೇವೆ. ಕಾಲಿನಲ್ಲಿ ಮಣ್ಣಿನ ಸ್ಪರ್ಶವೇ ಇಲ್ಲದಂತಹ ಜೀವನ ಶೈಲಿಯಾಗಿದೆ. ಅಯ್ಯೋ! ಪ್ರಕೃತಿ ಹಗಲು ರಾತ್ರಿ ಕರೆಯುತ್ತಲೇ ಇರುತ್ತದೆ. ಅದರ ಮಡಿಲಲ್ಲಿ ನಾವು ಕಂಡ ಸುಖ, ನೆಮ್ಮದಿ ಎಲ್ಲವೂ ಈಗ ಕಣ್ಣಿನ ಸ್ಪರ್ಶ ರೇಖೆಯ ಹಿಂದೆ ಸೆರೆಯಾಗಿವೆ. ಹಳೆಯ ನೆನಪುಗಳು ಒಂದಷ್ಟು ಹೂವಿನ ಪರಿಮಳದಂತೆ ಮರಳುತ್ತವೆ – ಬಾಲ್ಯದ ಆ ಉತ್ಸಾಹ, ಓಡಾಟ, ಮಣ್ಣಿನ ಸುಗಂಧ, ಹಾಡುವ ಹಕ್ಕಿಗಳ ಕೂಗು... ಇವು ಎಲ್ಲವೂ ನಮ್ಮನ್ನು ಮತ್ತೆ ನಿಸರ್ಗದತ್ತ ಕರೆದು ಕೊಳ್ಳುತ್ತವೆ. ಆದರೆ ನಾವು ಕೇಳಲು ಇಚ್ಛಿಸುತ್ತೇವಾ? ಸಮಯ ನೀಡುತ್ತೇವಾ?

What You’re Doing—Sometimes Do It Differently, You’ll Have a New Experience

Image
 A Walk in the Opposite Direction Today’s walk turned out to be unexpectedly amusing. While everyone in the park was walking from right to left, I unknowingly walked from left to right. I noticed a few surprised glances—some people even slowed down and stared. It felt like I was flowing against the current, and that gave me a strangely different experience. After the walk, I spent another half an hour doing some light exercises before heading home. Sometimes, doing something a little different brings a fresh perspective to even the simplest routines.

ಹೊಸ ಹಾದಿಯ ಕನಸು 6

 ಇನ್ನೊಂದು ರೋಮಾಂಚಕ ಸಂಚಿಕೆಗೆ ಸ್ವಾಗತ! ನೀವು ಹಿಂದಿನ ಸಂಚಿಕೆಯನ್ನು ತಪ್ಪಿಸಿಕೊಂಡಿದ್ದರೆ, ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ ಮತ್ತು ಅದನ್ನು ಓದಿ. ಮುಂದೆ  ಮತ್ತಷ್ಟು ಕುತೂಹಲಕರ ಸಂಗತಿಗಳನ್ನು ನೋಡೋಣ! ರಾಣಿ ಮತ್ತು ಅಪ್ಪ ಶಿವಪ್ಪ. ಅಲ್ಲಿ ಪಕ್ಕದಲ್ಲಿದ್ದ ಎಳ್ಳು ನೀರು ಕುಡಿದು, ಮತ್ತೆ ನಗರದಿಂದ ಕಾಲೇಜಿಗೆ ಹೋಗುವ ಬಸ್ಸಿಗೆ ಹತ್ತಿದರು. ಅಪ್ಪ ಬಸ್ ಕಂಡಕ್ಟರ್‌ನ್ನು ನೋಡಿ,"ಕಾಲೇಜ್ ಹೆಸರನ್ನ ಹೇಳಿ ಹೋಗ್ತೀರ?" ಎಂದು ಕೇಳಿದಾಗ, "ಹೌದು" ಎಂದು ಉತ್ತರಿಸಿದ. ಕಂಡಕ್ಟರ್ ಊರ ಹೆಸರನ್ನು ಹೇಳುತ್ತಾ ಜೋರಾಗಿ ಕೂಗುತ್ತಿದ್ದ. ರಾಣಿಗೆ ಆ ಹೆಸರು ಹೊಸದಾಗಿತ್ತು. ಆ ಕ್ಷಣಕ್ಕೆ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಅಪ್ಪ ಬಸ್ ನಂಬರ್‌ನ್ನು ಹೇಳಿ, "ಈ ನಂಬರ್‌ನ್ನು ನೆನಪಿಟ್ಟುಕೋ" ಎಂದರು. ಜನರು ಒಬ್ಬರ ಮೇಲೆ ಒಬ್ಬರು ಬಸ್ಸಿಗೆ ಹತ್ತಲು ಪ್ರಾರಂಭಿಸಿದರು. ಬಸ್ ಕಾಲೇಜಿನ ಕಡೆ ಹೊರಟಿತು. ಕಿಟಕಿಗಳಿಲ್ಲದ ಬಸ್‌ನೊಳಗೆ ತಂಪಾದ ಗಾಳಿ ಬೀಸುತ್ತಿತ್ತು. ಎರಡೂ ಬಸ್ಸು ಹತ್ತಿ ಇಳಿದು ಆಯಾಸಗೊಂಡ ರಾಣಿಗೆ "ಆಹಾ!" ಅನ್ನಿಸಿತು. ಸೂರ್ಯ ನಿಧಾನವಾಗಿ ಮೇಲೇರುತ್ತಿದ್ದಂತೆ,ಪ್ರಕಾಶಮಾನವಾದ ಕಿರಣಗಳು ಮುಖಕ್ಕೆ ಬೀಳುತ್ತವೆ. ಆಕಾಶದ ಕಡೆ ಚುಂಬಿಸುತ್ತಿದ್ದ ಆ ದೊಡ್ಡ ಕಟ್ಟಡಗಳು, ಮಕ್ಕಳ ಫ್ಯಾಷನ್‌ಬದ್ಧ ತೊಡಿಗೆ, ಸ್ಟೈಲಿಷ್ಟ್ ಇಂಗ್ಲಿಷ್ ಮಾತು—all seemed like calling her to a new world...

ಹೊಸ ಹಾದಿಯ ಕನಸು 5

 ರಾಣಿಯ ಕನಸುಗಳು, ಆಕೆಯ ಹೊಸ ಹಾದಿಗೆ ಒಂದು ಹೊಸ ದಾರಿ ತೋರಿಸುತ್ತಿದ್ದವು. ಬಸ್‌ ಸಾಗುತ್ತಿದ್ದಂತೆ, ಅವಳ ಯೋಚನೆಗಳು ಇನ್ನಷ್ಟು ಗಾಢವಾಗುತ್ತಿದ್ದವು. ಹೊಸ ಪರಿಸರ, ಹೊಸ ಜೀವನ, ಹೊಸ ಗುರಿಗಳು—ಎಲ್ಲವನ್ನೂ ತಲುಪುವ ಹಂಬಲದಲ್ಲಿ, ರಾಣಿ ತನ್ನ ಎದೆಗೆ ಧೈರ್ಯ ತುಂಬಿಕೊಳ್ಳುತ್ತಾಳೆ. 'ನಾವು ಇಲ್ಲಿ ಬಂದಿರುವುದು ಒಂದು ಹೊಸ ಆರಂಭದ ಗುರುತು' ಎಂದುಕೊಂಡಳು. ಹಠಾತ್ ರಾಣಿಗೆ ಹೊಟ್ಟೆ ತೊಳಲಾಯಿತು, ಒವ್ವೇಲೆ ವಾಂತಿ ಬರುವಂತಾಯಿತು.ಆಗ ಬಸ್ ನಿಧಾನವಾಗಿ ಬ್ರೇಕ್ ಹಾಕಿ, ಕೊನೆಯ ಬಸ್ ಸ್ಟಾಪ್‌ನಲ್ಲಿ ನಿಂತಿತು. ಅಪ್ಪ ಶಿವಪ್ಪ, 'ಏನಾಯ್ತು?' ಎಂದು ಕೇಳಿದಾಗ, ರಾಣಿ ಸ್ವಲ್ಪ ಹೊತ್ತು ಹಾಗೆ ಕುಳಿತುಕೊಂಡು ಸಹಿಸಿಕೊಳ್ಳುತ್ತಾಳೆ. ಎಲ್ಲರೂ ಬಸ್ಸಿನಿಂದ ಇಳಿದ ನಂತರ, ನಿಧಾನವಾಗಿ ಇಳಿದು, ಅಪ್ಪನ ಹಿಂದೆ ನಡೆಯತೊಡಗಿದಳು.ಅವರು ಮೀನು ಮಾರುಕಟ್ಟೆಯ ಮಧ್ಯೆ ಸಣ್ಣ ಹಾದಿಯಲ್ಲಿ ಹೋಗುತ್ತಿರುವಾಗ, ಅಲ್ಲಿನ ವಾಸನೆಗೆ ರಾಣಿಗೆ ಮತ್ತೊಮ್ಮೆ ಹೊಟ್ಟೆ ತೊಳಲಾಯಿತು. ಅದಕ್ಕಾಗಿ ಟವೆಲ್ ಮೂಗು ಬಾಯಿಗೆ ಭದ್ರವಾಗಿ ಮುಚ್ಚಿಕೊಂಡಳು.ಅದನ್ನು ಕಂಡು ಮೀನು ಮಾರುವ ಹೆಂಗಸೊಬ್ಬಳು ಮುಖ-ಬಾಯಿ ಮುಚ್ಚಿಕೊಂಡು ಈ ದಾರಿಯಲ್ಲಿ ಯಾಕೆ ಬರಬೇಕಾಗಿತ್ತು' ಎಂದಳು. ರಾಣಿಗೆ, 'ಅಬ್ಬಾ! ಎಷ್ಟು ದೂರ ನಡೆಯಬೇಕೆಂದು?' ಅನ್ನಿಸಿತು. ಕೊನೆಗೆ ಆ ಹಾದಿಯನ್ನು ದಾಟಿ, ಹೊರಗಿನ ರಸ್ತೆಗೆ ಬಂದು ನಿಂತರು. ರಸ್ತೆಯ ಸಂದು ದಾಟಿ, ಗಬ್ಬನೆ ಹೊಟ್ಟೆ ಹಿಡಿದು ವಾಂತಿ ಮಾಡಲಾರಂ...

ಹೊಸ ಹಾದಿಯ ಕನಸು 4

 ಬಸ್ಸು ಪಿಸುಗುಟ್ಟುತ್ತಾ ಹೆಜ್ಜೆ ಹೆಜ್ಜೆಯಾಗಿ ಸಾಗುತ್ತಿತ್ತು. ಜನಸಂದಣಿ, ಬಿಸಿನಗರದ ಗಾಳಿಯಲ್ಲಿ ರಾಣಿ ಆಲೋಚನೆಯ ಜಾಲದಲ್ಲಿ ಮುಳುಗುತ್ತಾಳೆ. "ಈ ಪ್ರಯಾಣ ಕೇವಲ ಬಸ್‌ನಲ್ಲಿಯೇ ಅಂತ್ಯಗೊಳ್ಳುವುದಿಲ್ಲ," ಅವಳ ಅಂತರಾಳದ ಆಲೋಚನೆಗಳು ಬಲಹೀನವಾಗಿದ್ದರೂ ಆಕೆಗೆ ಆಸಕ್ತಿ ಮೂಡಿಸುತ್ತವೆ. ಅಷ್ಟು ದಿನ ಹಳೆಯ ಪರಿಸರಕ್ಕೆ ಒಗ್ಗಿದ್ದ ರಾಣಿ, ಕಣ್ಣೆದುರಿನಲ್ಲಿಯೇ ಹಾದುಹೋಗುವ ದೊಡ್ಡ ದೊಡ್ಡ ಕಟ್ಟಡಗಳು, ಅಂಗಡಿಗಳು, ಬಟ್ಟೆಗಳ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳು, ಜನರ ವೈವಿಧ್ಯಮಯ ವೇಷಭೂಷಣಗಳನ್ನು ನೋಡಿದಾಗ ತಾನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದೇನೆ ಎಂದುಕೊಂಡಳು. ರಾಣಿ ತನ್ನ ವಯಸ್ಸಿಗೆ ತಕ್ಕ ನೂರು ಕನಸುಗಳನ್ನು ಹೊತ್ತಿದ್ದಳು. ತನ್ನ ಯೋಚನಾ ಜಾಲದಲ್ಲಿ ಮುಳುಗಿದ್ದ ರಾಣಿಗೆ ಹಠಾತ್, ಬಸ್ಸು ಒಂದು ದೊಡ್ಡ ಗುಂಡಿಗೆ ಬಿದ್ದಂತೆ ತಿರುಗಿ ಹೋಗಿತು. ರಾಣಿ ತನ್ನ ಬ್ಯಾಗ್ ಬಿಗಿಯಾಗಿ ಹಿಡಿದುಕೊಂಡು, ಜಾಗರೂಕರಾಗಿ ಬಸ್‌ನಲ್ಲಿ ನಿಂತಿದ್ದಳು. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ತಾನು ಮುಂದು, ತಾನು ಮುಂದು ಎಂದು ಪೈಪೋಟಿಗೆ ನಿಂತು ಮುಂದೆ ಸಾಗುತಿದ್ದವು.2-3 ಸ್ಟಾಪ್‌ಗಳ ನಂತರ, ರಾಣಿಗೆ ಕುಳಿತುಕೊಳ್ಳಲು ಸೀಟ್ ಸಿಕ್ಕಿತು. ಅವಳ ಅಪ್ಪ ಶಿವಪ್ಪ ಹಿಂಬದಿ ಹೋಗಿ ಕುಳಿತುಕೊಂಡರು. ಬಸ್‌ ಮಾತ್ರ ಜನರನ್ನು ಹತ್ತಿಸುತ್ತಾ ಇಳಿಸುತ್ತಾ ಸಾಗುತ್ತಿತ್ತು."ಕಂಡಕ್ಟರ್, 'ಎಲ್ಲಿ ಹಿಂದಿನ ಬಸ್ ಮುಂದೆ ಹೋಗುತು' ಎಂದು ಜೋರಾಗಿ ಅವ...

ಹೊಸ ಹಾದಿಯ ಕನಸು 3

 ಬಸ್‌ನಿಂದ ಇಳಿದ ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಇನ್ನೊಂದು ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಬಸ್‌ಸ್ಟ್ಯಾಂಡ್‌ನಲ್ಲಿ ಎಲ್ಲೆಡೆ ಕಸ, ಪ್ಲಾಸ್ಟಿಕ್ ಬಾಟಲ್‌ಗಳು ಬಿದ್ದಿದ್ದವು. ಆ ಸುತ್ತಲಿನ ಅಸ್ಥಿರ ಪರಿಸರವನ್ನು ನೋಡಿ, ರಾಣಿ ಹೌಹಾರಿಸುತ್ತಿದ್ದು, "ಎಲ್ಲಿ ನಿಂತಿದ್ದೇವೆ?" ಎಂದು ತಲೆಯಲ್ಲೇ ಅಸಹ್ಯದಿಂದ ಮನದಟ್ಟು ಮಾಡಿಕೊಂಡಳು. ಸ್ವಲ್ಪ ಹೊತ್ತಿನ ನಂತರ ಬಸ್ಸೊಂದು ಜನಸಂದಣಿಯನ್ನು ಭೇದಿಸಿಕೊಂಡು   ಬಂದು ನಿಂತಿತು. ಬಸ್‌ ಜನರಿಂದ ತುಂಬಿ ತುಳುಕುತ್ತಿತ್ತು. "ಇದಕ್ಕೆಲ್ಲ ನಾವು ತಾಳುಬೇಕಾ?" ಎಂದು ರಾಣಿ ತಾನು ಮಾಡುವ ಪ್ರತಿ ಹೆಜ್ಜೆಗೂ ಸುಸ್ತಾಗಿ ಹೋಗುತ್ತಾ, ಆಕೆಯ ಕೈಯಲ್ಲಿದ್ದ ಬ್ಯಾಗನ್ನು ಬಿಗಿಯಾಗಿ ಹಿಡಿದುಕೊಂಡು, ಅಪ್ಪನ ಕೈ ಹಿಡಿದುಕೊಂಡಳು. ಹೇಗೋ ಜನರನ್ನು ಪಕ್ಕಕ್ಕೆ ತಳ್ಳಿ, ರಾಣಿ ಮತ್ತು ಶಿವಪ್ಪ ಬಸ್‌ ಒಳಗೆ ನುಸುಳಿದರು. ಆಮೇಲೆ, ರಾಣಿ ಅಪ್ಪನ ಕಡೆ ನೋಡಿದರೂ, ಅವನ ಮುಖದಲ್ಲಿ ಒಂದು ವಿಚಿತ್ರ ಶಾಂತಿ. " ಇಲ್ಲಿ ಏನಾಗುತ್ತಿದೆ ಎಂದು ಅವನಿಗೆ ಅನಿಸುವುದಿಲ್ಲವೇ?"  ಎಂದು ರಾಣಿ ಆಲೋಚಿಸುತ್ತಿರುವಷ್ಟರಲ್ಲಿ, ಬಸ್‌ನ ಒಳಗೆ ಒಂದು ಬಿಸಿನಗರದ ಝಳಕು ಎಸೆಯಿತು. ಆಕೆಗೆ ಆ ಮನೆಯಲ್ಲಿ ಇರುವಾಗಿಸಿದ ಆ ಗಾಢ ತಪಸ್ಸು ನೆನಪಾದಂತಿತ್ತು.ಅದು ಕೇವಲ ಪ್ರಯಾಣವಲ್ಲ, ಈ ಬದುಕಿನ ಒಂದು ಸಂಕೇತವಾಗಿತ್ತು. "ನನಗೆ ಮುಂದೆ ಏನೋ ದೊಡ್ಡದು ಕಾದಿರುವಂತೆ ಅನ್ನಿಸುತ್ತಿದೆ..." ಈ ಯೋಚನೆಗಳ ನಡುವೆ ಆಕೆಗ...