Posts

ರೈಲು ಪ್ರಯಾಣ

Image
 ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ರೈಲಿನಲ್ಲಿ ಸಂಪೂರ್ಣ ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಯಾರೋ ಬಲವಂತವಾಗಿ ನನ್ನನ್ನು ಒಳಗೆ ತಳ್ಳಿದರು. ಹೆಂಗಸರು ಮಾತ್ರ ಕುಳಿತುಕೊಳ್ಳುವ ವಿಭಾಗದಲ್ಲಿ, ಕೆಲವರು ಜಾಗ ಮಾಡಿಕೊಟ್ಟು, ನಾನು ಕುಳಿತಿದ್ದೆ. ನನ್ನ ಎದುರು ಇಬ್ಬರು ಸಹೋದರಿಯರು ಕುಳಿತಿದ್ದರು, ಇಬ್ಬರೂ ಮದುವೆಯಾಗಿದ್ದವರು. ಅವರ ಮಾತುಕತೆ ಕೇಳಿದಾಗ, ನಾಲ್ಕು ಸಹೋದರಿಯರು ಇರಬಹುದು ಎಂದು ಅಂದ್ಕೊಂಡೆ. ಅವರಲ್ಲಿ ಅವರ ಕೊನೆಯ ತಂಗಿಯ ಮದುವೆ ಈ ವಾರವಂತೆ. ಆದಕ್ಕಾಗಿ ಊರಿಗೆ ಹೊರಟಿದ್ದರು. ನಾನು ಅವರ ತಮಾಷೆಯ ಸಂಭಾಷಣೆಗಳನ್ನು ಕೇಳುತ್ತಾ ಕುಳಿತ ನನಗೆ ಮೈಸೂರ್ ತಲುಪಿದೆ ಗೊತಾಗಲಿಲ್ಲ.ಈ ರೀತಿಯ ಸಂಭಾಷಣೆ ಕೇಳದೆ ಅದೆಷ್ಟು ವರ್ಷಗಳೇ ಕಳೆದಿದೆ ಅನಿಸುತಿತ್ತು.

ಕಾಂತಾರದ ಅನುಭವದಲ್ಲಿ ಮಂಗಲತಿಯ ನೆನಪು

 ಎಂತಹ ಶಿಸ್ತಿನ ಸಾಲು! 30 ರಿಂದ 35 ಒಟ್ಟಿಗೆ ಹೋಗುತ್ತವೆ.ಗಂಗಾ, ಪೂಜಾ, ಮಂಗಲತಿ, ಗೌರಿ, ಲಕ್ಷ್ಮಿ, ಗುಂಡ, ಕರಿಯ, ನಂದಿ, ಪುಣ್ಯ, ಕಾಳಿ.... ಬೆಳಿಗ್ಗೆ ಆಹಾರವನ್ನು ತಿಂದು.ಪ್ರತಿದಿನವೂ ಕಾಡಿಗೆ ಜಮ್ಮಿ ಮತ್ತು ರಾಖಿಯೊಂದಿಗೆ ಹೋಗುವುದು. ಓಡುತ್ತಾ, ಮಣ್ಣಿನ ಗುಡ್ಡೆ ಮೇಲೆ ಹಾರುತ್ತಾ, ಹಾಯಿತ್ತಾ ತಲೆಗೆ ಮಣ್ಣು ಮೆತ್ತಿಸಿಕೊಂಡು, ಓಡುವುದು,   ಅದೆಂಥ ವಿನೋದ.ಜೊತೆಗೆ ಬೆಳ್ಳಕ್ಕಿಗಳು, ನಕ್ಕು ನಕ್ಕು ಸಾಕಾಗುತ್ತಿತ್ತು. ಅಂದು ಚಳಿಗಾಲ,ಹುಲ್ಲು ಬೆಳೆಯುವ ಸಮಯ, ಚಳಿಯ ಹಿಮದಲ್ಲಿಯೂ ತಮ್ಮ ಪ್ರತಿದಿನ  ದಿನಚರಿ ಬೆಳಿಗ್ಗೆ 7:30 ರಿಂದ 8 ಗಂಟೆ   ಕಾಡಿಗೆ ಹೋಗುವುದು.  ಸಂಜೆ 4 ರಿಂದ 4:30 ರ ಸುಮಾರಿಗೆ ಮನೆಗೆ ಹಿಂದಿರುಗು ವುದು. ಗೇಟ್ ಮುಂದೆ ನಿಂತು,ಅಂಬಾ" ಎಂದು ಕರೆದು ಕೊಟ್ಟಿಗೆ ಮನೆಗೆ ಪ್ರವೇಶಿಸ. ಒಂದು ದಿನ, ಮಂಗಲತಿ ಕಾಡಿನಿಂದ ಹಿಂತಿರುಗಲಿಲ್ಲ.ಹುಲ್ಲು ಚೆನ್ನಾಗಿ ಬೆಳೆಯುತ್ತಿದ್ದರಿಂದ ಅವಳು ಹೊರಗೇ ಇರಬಹುದೆಂದು ನಾವು ಭಾವಿಸಿದ್ದೇವು.ಮರುದಿನವೂ ಸಹ ಹಿಂತಿರುಗದಿದ್ದಾಗ,  ತಾಯಿ ಮತ್ತು ನಾನು ಅವಳನ್ನು ಹುಡುಕಲು ಪ್ರಾರಂಭಿಸಿದೆವು.ಕಲ್ಕುಡ ದೈವಸ್ಥಾನದ ಬನ ಒಳಗೆ ಇರುವುದು ಕಾಣಿತು.ನಾವು ಬನದ ಒಳಗೆ ಹೋಗುದಿಲ್ಲ.ನಾವು ಅವಳ ಹೆಸರನ್ನು ಕರೆದಾಗ, ಅವಳು ತನ್ನ ಮುಖವನ್ನು ಎತ್ತಿ ನೋಡಿದಳು, ಅವಳ ದೇಹವು ನಡುಗುತಿತ್ತು. ಕಾಂತಾರ ಸಿನಿಮಾದ ದೃಶ್ಯದಲ್ಲಿ ಇದ್ದಂತೆ ಆವೇಶಾದಿದ್ದಳು....

ಹುಚ್ಚು ಪ್ರೀತಿ

ಅರೆ, ನಾನು ಶ್ವೇತಾಳನ್ನು ಬೆಂಗಳೂರಿನಲ್ಲಿ ನೋಡಿದೆ. ನಾವು ಇಬ್ಬರೂ ಒಟ್ಟಿಗೆ ಓದಿ ಎಷ್ಟೋ ವರ್ಷಗಳಾಯಿತು. ನಾವು ಡಿಗ್ರಿ ಮಾಡುವಾಗ, ಹಾಸ್ಟೆಲ್‍ನಲ್ಲಿ ಜೊತೆ ಇರ್ತಿದ್ವಿ. ನಮ್ಮ ಕೆಲವು ಉತ್ತಮ ದಿನಗಳನ್ನು ಒಟ್ಟಿಗೆ ಹಂಚಿಕೊಂಡಿದ್ದೇವೆ,  ದೊಡ್ಡ ಕನಸುಗಳನ್ನು ಹೊಂದಿದ್ದೇವೆ ಮತ್ತು ಪರಸ್ಪರ ಬೆಂಬಲಿಸುತ್ತಿದ್ದೆವು.ಅವಳು ತನ್ನ ಗಂಡನನ್ನೂ, ಮಗುವನ್ನೂ ಪರಿಚಯಿಸಿದಳು. ಅವಳ ಮುದ್ದಾದ ಕುಟುಂಬವನ್ನು ನೋಡಿದಾಗ, ನನಗೆ ಥಟ್ಟನೆ ನಮ್ಮ ಕಾಲೇಜು ದಿನಗಳು ನೆನಪಾದವು.ನನಗೆ ಪರೀಕ್ಷೆಯ ದಿನದೊಂದು ಘಟನೆ ನೆನಪಿದೆ. ಹಿಂದಿನ ರಾತ್ರಿ, ನಾನು ಇಡೀ ರಾತ್ರಿ ಓದಿದ್ದೆ, ಆದರೆ ಶ್ವೇತಾ ಬೇಗನೆ ಮಲಗಿಬಿಟ್ಟಳು. ಮರುದಿನ ಬೆಳಗ್ಗೆ, ನಾನು ಪರೀಕ್ಷೆಗೆ ಸಿದ್ಧಗೊಂಡೆ, ಆದರೆ ಶ್ವೇತಾ ಇನ್ನೂ ನಿದ್ದೆಯಲ್ಲಿ ಮಲಗಿದ್ದಳು. ನಾನು ಅವಳನ್ನು ಎಬ್ಬಿಸಿ, ಪರೀಕ್ಷೆ ಹಾಲ್‍ಗೆ ಹೋದೆ, ಆದರೆ ಅವಳು ಪರೀಕ್ಷೆಗೆ ಹಾಜರಾಗಲಿಲ್ಲ.ಪರೀಕ್ಷೆಯ ನಂತರ ನಾನು ಹಾಸ್ಟೆಲ್‍ಗೆ ಬಂದು ನೋಡಿದಾಗ, ಶ್ವೇತಾ ಅತ್ತು ಅವಳ ದಿಂಬು ಸಂಪೂರ್ಣವಾಗಿ ನೆನೆಸಿತ್ತು. ನಾನು ಅವಳನ್ನು ಏನಾಯ್ತು ಅಂತ ಕೇಳಿದಾಗ, ಅವಳು ಉತ್ತರಿಸಲಿಲ್ಲ.ನಾನು ನನ್ನ ಮೊಬೈಲ್ ರೂಮ್‍ನಲ್ಲಿ ಬಿಟ್ಟು ಹೋಗಿದ್ದೆ, ಪರೀಕ್ಷೆ ಮುಗಿಸಿಕೊಂಡು ಬಂದ ಮೇಲೆ ನೋಡಿದಾಗ, ಶ್ವೇತಾ ನನ್ನ ಫೋನ್ ಬಳಸಿಕೊಂಡು, ಒಂದೇ ನಂಬರ್‍ಗೆ ಹಲವಾರು ಬಾರಿ ಕರೆ ಮಾಡಿ, ಮೆಸೇಜ್ ಕಳುಹಿಸಿದ್ದಳು. ಆದ್ರೆ, ಪ್ರತಿಕ್ರಿಯೆ ಬಂದಿರಲಿಲ್ಲ. ನಾನು ಮತ್ತೆ ಕೇಳಿದಾ...

ಸುಮಾಳ ಕನಸಿನ ಕಾರು

 ಬಾಲ್ಯದಿಂದಲೂ ಸುಮಾಗೆ ಸ್ವಂತ ಕಾರು ಹೊಂದುವ ಕನಸು. ಕಾರನ್ನು ನೋಡಿದಾಗಲೆಲ್ಲಾ ಅವಳಿಗೆ ಆಕರ್ಷಣೆ ಮೂಡುತ್ತಿತ್ತು. ಚೆನ್ನಾಗಿ ಓದಿದರೆ ಮುಂದೊಂದು ದಿನ ಕಾರು ಕೊಳ್ಳಬಹುದು ಎಂದುಕೊಂಡಳು. 10 ನೇ ತರಗತಿಯಲ್ಲಿ, ಅವಳು ಕಷ್ಟಪಟ್ಟು ಓದಿದಳು,  ಆದರೆ ಅವಳ ತಂದೆ ಮುಂದೆ ಓದಲು ಬಿಡಲಿಲ್ಲ . ಅದರ ನಂತರ, ಅವಳು ಹಣ ಸಂಪಾದಿಸಲು ಬೀಡಿ ಕಟ್ಟಿ,ದುಡ್ಡು ಉಳಿಸಲು ಪ್ರಾರಂಭಿಸಿದಳು.ಅಂತಿಮವಾಗಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಮತ್ತು ಅದನ್ನು ಚಲಾಯಿಸಲು ಪ್ರಾರಂಭಿಸಿದಳು.ಯಾರೋ ಆಕೆಗೆ ಕಾರನ್ನು ಉಡುಗೊರೆಯಾಗಿ ನೀಡಿರಬೇಕು ಎಂದು ಜನರು ಗಾಸಿಪ್ ಪ್ರಾರಂಭಿಸಿದರು.ಕಾರಿಗೆ ಖರ್ಚು ಮಾಡುವ ಬದಲು  ಮದುವೆಗೆ ಆಗುತಿತ್ತು. ನಿರಾಸೆಯಿಂದ ಸುಮಾ ಕಾರು ಮಾರಿದಳು. ಎಲ್ಲರೂ ಮತ್ತೆ ಮಾತನಾಡಲಾರಂಭಿಸಿದರು.ಇದರಿಂದ ದುಃಖಿತಳಾದಳು. "ನನಗೆ ಇಷ್ಟವಾದದ್ದನ್ನು ನಾನು ಮಾಡಲಾರೆ" ಎಂದು ಯೋಚಿಸಿದಳು.ಇದನ್ನು ಕಂಡ  ತಂದೆ ತನ್ನ ತಪ್ಪನ್ನು ಅರಿತು ಅವಳ ಕನಸುಗಳನ್ನು  ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಈಗ ಅವಳು ಅವಳ ಮದುವೆಗೆ ಮತ್ತು ವರದಕ್ಷಿಣೆಯಾಗಿ ಭಾವಿ ಗಂಡನಿಗೆ ಕಾರ್ ಗಿಫ್ಟ್ ಮಾಡಿದಳು.

ಅಜ್ಜನ ಸ್ವಾಭಿಮಾನ

 ಅಜ್ಜ 10 ವರ್ಷದಾಗಿದ್ದಾಗ, ಅವರ ತಂದೆ ನಿಧನರಾದರು. ಆ ಸಮಯದಲ್ಲಿ, ಅವರು ಮೂರನೇ ತರಗತಿಯಲ್ಲಿ ಓದುತ್ತಿದ್ದರು.  ಅವರು ಶಾಲೆಯಿಂದ ಮನೆಗೆ ವಾಪಸ್ಸು ಬಂದಾಗ, ಅವರ ತಾಯಿ ಅತ್ತುಕೊಂಡು ಕುಳಿತಿದ್ದರು. ಅವರ ಮಾವನವರು ಏನೋ ಹೇಳಿದುದರಿಂದ ತಾಯಿ ದುಃಖಿತರಾದರು. ಆ ದಿನವೇ, ಅವರು ಶಾಲೆಯನ್ನು ಬಿಟ್ಟು, ಹೋಟೆಲ್‌ನಲ್ಲಿ ಗ್ಲಾಸ್ ಕ್ಲೀನರ್ ಕೆಲಸ ಆರಂಭಿಸಿದರು. ನಂತರ ಅವರು ಒಂದು ಮನೆ ಬಾಡಿಗೆಗೆ ತೆಗೆದುಕೊಂಡು, ತಾಯಿಯನ್ನು ತಮ್ಮ ಜೊತೆಗೆ ಕರೆದುಕೊಂಡು ಬಂದರು. ಸಮಯದ ನಂತರ, ಅವರು ತಮ್ಮ ವ್ಯವಹಾರವನ್ನು ಹಂತ ಹಂತವಾಗಿ ಬೆಳೆಸಿ, ಸ್ವಂತ ಮನೆ ಕಟ್ಟಿದರು. 16ನೇ ವಯಸ್ಸಿನಲ್ಲಿ ಅವರು  ಅಜ್ಜಿಯನ್ನು ಮದುವೆ ಮಾಡಿಕೊಂಡರು. ಇವತ್ತು  ಅಜ್ಜಿ ಈ ಕಥೆಯನ್ನು ಹೇಳುವಾಗ,ಹೆಮ್ಮೆ ಹಾಗೂ ಕಣ್ಣಿನಲ್ಲಿ ಕಣ್ಣೀರು ತುಂಬುತ್ತವೆ. User-Agent: * Disallow: /private/ # Disallows a specific directory if needed Allow: /ads/preferences/ Allow: /dtt/k Allow: /gpt/ Allow: /pagead/show_ads.js Allow: /pagead/js/adsbygoogle.js Allow: /pagead/*/show_ads_impl.js Allow: /static/glade.js Allow: /static/glade/ Allow: /tag/js/

ಆ ದಿನಗಳು

 ದಿವ್ಯಾ, ಬೆಂಗಳೂರಿನಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ, ಈಗ ಅವಳಿಗೆ ಕೆಲಸವಿಲ್ಲ ಮತ್ತು ಎಲ್ಲಾ ಜವಾಬ್ದಾರಿಗಳು ಅವಳ ಹೆಗಲ ಮೇಲೆ ಬಿದ್ದಿವೆ. ಅವಳು ತನ್ನ ಪಿಜಿ ಬಾಡಿಗೆ, ಹೆತ್ತವರ ಮೊಬೈಲ್ ರೀಚಾರ್ಜ್‌ಗಳು, ವಿದ್ಯುತ್ ಮತ್ತು ಗ್ಯಾಸ್ ಬಿಲ್ಲುಗಳು, ದಿನಸಿ ಸಾಮಾನುಗಳು, ಮತ್ತು ಸಹೋದರನ ಶಿಕ್ಷಣವನ್ನು ನಿರ್ವಹಿಸುತ್ತಾಳೆ. ಇದಕ್ಕಿಂತ ಹೊರತಾಗಿ, ಅವಳು ಕುಟುಂಬದ ಕಾರ್ಯಕ್ರಮಗಳ ಖರ್ಚುಗಳನ್ನು ಸಹ ನಿಭಾಯಿಸಬೇಕಾಗಿದೆ. ಕಳೆದ ಒಂದು ವರ್ಷದಲ್ಲಿ, ತನ್ನ ಎಲ್ಲಾ ಉಳಿತಾಯವನ್ನು ಖರ್ಚುಮಾಡಿ, ಈಗ ಅವಳ ಬ್ಯಾಂಕ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಉಳಿದಿದೆ. ಹೆಚ್ಚುತ್ತಿರುವ ಆರ್ಥಿಕ ಒತ್ತಡದ ನಡುವೆಯೂ, ದಿವ್ಯಾ ತನ್ನ ನೈಜ ಪರಿಸ್ಥಿತಿಯನ್ನು ಪೋಷಕರಿಗೆ ಹೇಳಲು ಹೆದರುತ್ತಾಳೆ. ಪ್ರತಿಸಾರಿ ಅವಳು ತೊಂದರೆಗಳನ್ನು ಹೇಳಲು ಪ್ರಯತ್ನಿಸಿದಾಗ, ಹೆತ್ತವರಿಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕಾಗಿ ಹಿಂಜರಿಯುತ್ತಾಳೆ. ಈ ನಡುವೆ, ಆಕೆಯ ಪೋಷಕರು ಆಕೆಯ ಮದುವೆಗಾಗಿ ಸಂಬಂಧಗಳನ್ನು ಹುಡುಕುತ್ತಿದ್ದು, ಆಕೆಯ ಪೋಷಕರು ಅವಳ ಬಳಿ ಹಣವಿದೆ ಎಂದು ಭಾವಿಸಿದ್ದರು. ಆಕೆಯ ಮದುವೆಯ ವೆಚ್ಚವನ್ನು ಅವಳು ನಿರ್ವಹಿಸುತ್ತಾಳೆ ಎಂದುಕೊಂಡಿದ್ದರು. ಆದರೆ, ಈ ವೇಳೆಗೆ ಆಕೆಯ ಖಾತೆ ಸಂಪೂರ್ಣ ಖಾಲಿಯಾಗಿದೆ. ದಿವ್ಯಾ ತನ್ನ ಹೋರಾಟಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಬಹಳ ಇಚ್ಛಿಸುತ್ತಾಳೆ, ಆದರೆ ಪ್ರತಿಬಾರಿ ಪ್ರಯತ್ನಿಸಿದಾಗ ಆಕೆಯ ಧ್ವನಿ ನಿಶ್ಶಬ್ದವಾಗುತ್ತದೆ.  ಈಗಷ್ಟೇ ಕ...

ಬಾಟಲಿ ಒಳಗಿನ ನಂಟು

  ನಾನು ಲಂಡನ್‌ನಲ್ಲಿ ಮದುವೆಯಾಗಿ ಅಲ್ಲಿ ನೆಲೆಸಿದ್ದೆ. 5 ವರ್ಷಗಳ ನಂತರ, ನಾನು ಭಾರತಕ್ಕೆ ಬಂದೆ. ಈಗ ನನಗೆ ಅದಿತಿ ಮತ್ತು ದೃತಿ ಎಂಬ ಇಬ್ಬರು ಮಕ್ಕಳಿದ್ದಾರೆ.ನಾನು ನನ್ನ ತಾಯಿಯ ಮನೆಗೆ ಹೋಗುತ್ತಿರುವಾಗ, ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಿಟ್ಟು ನನಗೆ ಇದ್ದಕ್ಕಿದ್ದಂತೆ ಭೇಟಿಯಾದ.ಮೊದಲಿನಿಂದಲೂ ಕಿಟ್ಟುಯೆಂದು ಕರೆಯುವ ವಾಡಿಕೆ.ಅವನ ಮೂವರು ಹೆಣ್ಣುಮಕ್ಕಳು ನನ್ನ ವಯಸ್ಸಿನವರೇ. ಅವನ ಆರೋಗ್ಯ, ಅವನ ಹೆಂಡತಿಯ ಆರೋಗ್ಯ, ಮತ್ತು ಮಕ್ಕಳಾದ ಗೀತಾ, ಸೀತು, ಮತ್ತು ಸಾವಿತ್ರಿ ಬಗ್ಗೆ ಕೇಳಿದೆ, ಮತ್ತು ಅವರ ಮದುವೆಯ ಬಗ್ಗೆ ವಿಚಾರಿಸಿದೆ. 'ಇಲ್ಲ' ಎಂದು ಹೇಳಿದಾಗ, ಅವನ ಕಣ್ಣು ಕಣ್ಣೀರಿನಿಂದ ತುಂಬಿತು.ನಂತರ, ನಾನು ಸ್ವಲ್ಪ ಹಣ ಕೊಟ್ಟೆ.ತಕ್ಷಣ ಬಾರ್‌ಗೆ ಹೋದ. ಹಳೆ ನೆನಪು ಕಿಟ್ಟು ಪ್ರತಿದಿನ ನಮ್ಮ ಕೃಷಿ ಕೆಲಸ ಮಾಡುತ್ತಿದ್ದ. ಅವ ಬೆಳಗ್ಗೆ ತಡವಾಗಿ ಬಂದರೂ, ಸಂಜೆ ಮಾತ್ರ ಸಮಯಕ್ಕೆ ಸರಿಯಾಗಿ ಕುಡಿಯಲು ನಗರಕ್ಕೆ ಪ್ರತಿದಿನ 15 ಕಿಮೀ ಪ್ರಯಾಣ ಮಾಡುತ್ತಿದ್ದ. ನನ್ನ ಗ್ರಾಮದಿಂದ ಕೊನೆಯ ಬಸ್ ಸಂಜೆ 5 ಗಂಟೆಗೆ ಹೊರಡುತ್ತಿತ್ತು, ಮತ್ತು ಆ ಬಸ್ ರಾತ್ರಿ 9 ಗಂಟೆಗೆ ಹಿಂದಿರುಗುತ್ತಿತ್ತು