Posts

ಹೊಸ ಹಾದಿಯ ಕನಸು 3

 ಬಸ್‌ನಿಂದ ಇಳಿದ ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಇನ್ನೊಂದು ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಬಸ್‌ಸ್ಟ್ಯಾಂಡ್‌ನಲ್ಲಿ ಎಲ್ಲೆಡೆ ಕಸ, ಪ್ಲಾಸ್ಟಿಕ್ ಬಾಟಲ್‌ಗಳು ಬಿದ್ದಿದ್ದವು. ಆ ಸುತ್ತಲಿನ ಅಸ್ಥಿರ ಪರಿಸರವನ್ನು ನೋಡಿ, ರಾಣಿ ಹೌಹಾರಿಸುತ್ತಿದ್ದು, "ಎಲ್ಲಿ ನಿಂತಿದ್ದೇವೆ?" ಎಂದು ತಲೆಯಲ್ಲೇ ಅಸಹ್ಯದಿಂದ ಮನದಟ್ಟು ಮಾಡಿಕೊಂಡಳು. ಸ್ವಲ್ಪ ಹೊತ್ತಿನ ನಂತರ ಬಸ್ಸೊಂದು ಜನಸಂದಣಿಯನ್ನು ಭೇದಿಸಿಕೊಂಡು   ಬಂದು ನಿಂತಿತು. ಬಸ್‌ ಜನರಿಂದ ತುಂಬಿ ತುಳುಕುತ್ತಿತ್ತು. "ಇದಕ್ಕೆಲ್ಲ ನಾವು ತಾಳುಬೇಕಾ?" ಎಂದು ರಾಣಿ ತಾನು ಮಾಡುವ ಪ್ರತಿ ಹೆಜ್ಜೆಗೂ ಸುಸ್ತಾಗಿ ಹೋಗುತ್ತಾ, ಆಕೆಯ ಕೈಯಲ್ಲಿದ್ದ ಬ್ಯಾಗನ್ನು ಬಿಗಿಯಾಗಿ ಹಿಡಿದುಕೊಂಡು, ಅಪ್ಪನ ಕೈ ಹಿಡಿದುಕೊಂಡಳು. ಹೇಗೋ ಜನರನ್ನು ಪಕ್ಕಕ್ಕೆ ತಳ್ಳಿ, ರಾಣಿ ಮತ್ತು ಶಿವಪ್ಪ ಬಸ್‌ ಒಳಗೆ ನುಸುಳಿದರು. ಆಮೇಲೆ, ರಾಣಿ ಅಪ್ಪನ ಕಡೆ ನೋಡಿದರೂ, ಅವನ ಮುಖದಲ್ಲಿ ಒಂದು ವಿಚಿತ್ರ ಶಾಂತಿ. " ಇಲ್ಲಿ ಏನಾಗುತ್ತಿದೆ ಎಂದು ಅವನಿಗೆ ಅನಿಸುವುದಿಲ್ಲವೇ?"  ಎಂದು ರಾಣಿ ಆಲೋಚಿಸುತ್ತಿರುವಷ್ಟರಲ್ಲಿ, ಬಸ್‌ನ ಒಳಗೆ ಒಂದು ಬಿಸಿನಗರದ ಝಳಕು ಎಸೆಯಿತು. ಆಕೆಗೆ ಆ ಮನೆಯಲ್ಲಿ ಇರುವಾಗಿಸಿದ ಆ ಗಾಢ ತಪಸ್ಸು ನೆನಪಾದಂತಿತ್ತು.ಅದು ಕೇವಲ ಪ್ರಯಾಣವಲ್ಲ, ಈ ಬದುಕಿನ ಒಂದು ಸಂಕೇತವಾಗಿತ್ತು. "ನನಗೆ ಮುಂದೆ ಏನೋ ದೊಡ್ಡದು ಕಾದಿರುವಂತೆ ಅನ್ನಿಸುತ್ತಿದೆ..." ಈ ಯೋಚನೆಗಳ ನಡುವೆ ಆಕೆಗ...

ಹೊಸ ಹಾದಿಯ ಕನಸು 2

 ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಬಸ್ ಹತ್ತಿಕೊಂಡರು. ಬೆಳಗ್ಗೆ 7 ಗಂಟೆಯ ಬಸ್ ಆಗಿದ್ದರಿಂದ ಜನರು ಅಷ್ಟು ಇದ್ದಿರಲಿಲ್ಲ, ಮತ್ತು ಕಾಲೇಜು ಇನ್ನೂ ಆರಂಭವಾಗಿರಲಿಲ್ಲ. ರಾಣಿ ಖಾಲಿ ಇರುವ ಸೀಟಿನಲ್ಲಿ ಕುಳಿತಳು. ಆಕೆ ಕುಳಿತ ಸೀಟಿನಲ್ಲಿ ಯಾರು ಬರಲಿಲ್ಲವೆಂದು ತಾನು ತನ್ನ ಬ್ಯಾಗನ್ನು ಪಕ್ಕದಲ್ಲಿ ಇಟ್ಟುಕೊಂಡಳು. ಬಸ್‌ನಲ್ಲಿ "ಹರಿವಾಸನಂ" ಎಂಬ ಅಯ್ಯಪ್ಪನ ಹಾಡು ಜೋರಾಗಿ ಕೇಳಿಸುತ್ತಿತ್ತು.  ಬಸ್ ಸ್ಟ್ಯಾಂಡಿನಲ್ಲಿ ಬಸ್ ನಿಲ್ಲುತ್ತಿದ್ದಾಗ,ಬಸ್ ಮುಂದಿನ ಹಿಂದಿನ ಬಾಗಿಲಿನ ಕಡೆಗೆ ತಿರುಗಿ, ಯಾರಾದರೂ ನನ್ನ ಕಾಲೇಜಿಗೆ ಬರುವವರಿದಾರಾ ಎಂದು ನೋಡುತ್ತಿದ್ದಳು. ಆ ಹಾಡಿನ ಮಧ್ಯದಲ್ಲಿ, ಹಿಮದ ಹನಿಗಳ ನಡುವೆ ಬಸ್ ಸದ್ದು ಮಾಡುತ್ತಾ ಹೋಗುತ್ತಿತ್ತು.ಆ ನಡುವೆ ರಾಣಿ ನಿಧಾನವಾಗಿ ನಿದ್ದೆಗೆ ಜಾರಿದಳು.ಆದರೆ ಆಕೆಗೇ ಅದು ಗೊತ್ತಾಗಲಿಲ್ಲ. ಶಿವಪ್ಪ ಬಂದು ಎಬ್ಬಿಸಿದಾಗ, ರಾಣಿ ಬೆಚ್ಚಿ ಎದ್ದುಕೊಂಡಳು. ಅಷ್ಟರಲ್ಲೇ, ಬಸ್ ಆಕೆಗೆ ಇಳಿಯಬೇಕಾದ ಬಸ್ ಸ್ಟ್ಯಾಂಡಿಗೆ ಬಂದು ನಿಂತಿತ್ತು.  ಆ ಹೊತ್ತಿಗೆ ಬಸ್ ಜನರಿಂದ ತುಂಬಿತ್ತು. ಹೇಗೋ ಜನರ ನಡುವೆ ನುಸುಳಿ,ಬ್ಯಾಗ್ನ್ನು ಎಳೆದುಕೊಂಡು ರಾಣಿ ತನ್ನ ಅಪ್ಪನೊಂದಿಗೆ ಬಸ್‌ನಿಂದ ಇಳಿದಳು. ಮುಂದುವರೆಯುವುದು..... Older  https://smartstandlif.blogspot.com/2024/09/1.html

ಹೊಸ ಹಾದಿಯ ಕನಸು 1

 ಬಸ್‌ಗೆ ತಡವಾಗಿದರಿಂದ, ಅಪ್ಪ ಶಿವಪ್ಪ ಅಮ್ಮ ದೇವಕಿನ ಸೇರಿಸಿ ಬೈಯಲಾರಂಭಿಸಿದರು. ಮತ್ತೆ ಕೈ ಬೀಸಿಕೊಂಡು ಮುಂದೆ ನಡೆದರು.ರಾಣಿ ಹೆಗಲ ಮೇಲೆ ಕಾಲೇಜು ಬ್ಯಾಗ್‌ನ್ನು, ಕೈಯಲ್ಲಿ ಬಟ್ಟೆ ತುಂಬಿದ ಬ್ಯಾಗ್‌ನ್ನು ಹಿಡಿದು ಹಿಂದಿನಿಂದ ಓಡಿದಳು.ಮನೆಯಿಂದ ಬಸ್ ನಿಲ್ದಾಣಗೆ 15 ನಿಮಿಷದ ದಾರಿ. ಬಸ್ ಶ್ರೀದೇವಿ ಪಾಯಂ ಎಂದು ಸೌಂಡ್ ಮಾಡಿದ ಶಬ್ದ ಕೇಳಿಸಿತು. ಅಪ್ಪನ ಸಿಟ್ಟು ಏನೋ ಜಾಸ್ತಿಯಾಯಿತು."ಇನ್ನು ಬಸ್ ಸಿಕ್ಕಾಗನೇ"ಎಂದು ಬೈಯಲಾರಂಭಿಸಿದರು. ರಾಣಿ ಬ್ಯಾಗ್ಗಳ ಭಾರದಿಂದ ಸುಸ್ತಾಗಿ ಉಸು ಉಸು ಎಂದು ನಿಟ್ಟುಸಿರು ಬೀಡುತಿದ್ದಳು. ದಾರಿಯಲ್ಲಿ ಹಾಲು ಡೈರಿ ಹಾಕಲು ಹೋದ ರಾಮಯ್ಯ ಸಿಕ್ಕಿದರು, ಅವರು "ಬಸ್ ಇನ್ನೂ ಬಂದಿಲ್ಲ, ದೂರದಲ್ಲಿದೆ,ಬರುವಾಗಲೆ ಹಾರ್ನ್ ಹಾಕುತ್ತಾರೆ" ಎಂದು ಹೇಳಿದರು. ಶಿವಪ್ಪ ದಬ್ಬ ದಬ್ಬ ಹೆಜ್ಜೆ ಹಾಕಿ ಹೋದರು, ರಾಣಿ ಅವರ ಹಿಂದಿನಿಂದ ಓಡಿದಳು. ಅರ್ಧ ದಾರಿ ಇರುವಾಗಲೇ ಬಸ್ ಬಂದು ಬಸ್ ಸ್ಟ್ಯಾಂಡ್‌ನಲ್ಲಿ ನಿಂತಿತು.ಇನ್ನೂ ಬಸ್ ಕೈ ತಪ್ಪಿತು,ಎಂದುಕೊಂಡು ಮತ್ತೆ ಅಪ್ಪನ ಬೈಗುಳ ನೆನೆಸಿ ನಡುಗಿದಳು. ಆದರೆ ಬಸ್ ಡ್ರೈವರ್ ದೂರದಲ್ಲಿಯೇ ಆವರನ್ನ ಗಮನಿಸಿ ಸ್ವಲ್ಪ ಹೊತ್ತು ಕಾದೂ, ಹತ್ತಿಕೊಂಡರು. ಮುಂದುವರೆಯುವುದು.....

ಹೊಸ ಹಾದಿಯ ಕನಸು

ರಾಣಿ ಆಗಷ್ಟೇ 10ನೇ ತರಗತಿ ಮುಗಿಸಿ ಕಾಲೇಜಿಗೆ ಸೇರಿದು. ಕಾಲೇಜು ಮನೆಯಿಂದ ಸ್ವಲ್ಪ ದೂರವಾಗಿರುವುದರಿಂದ ಹಾಸ್ಟೆಲ್‌ನಲ್ಲಿ ಇರಬೇಕಾಯಿತು. ಸೈನ್ಸ್ ಆಯ್ಕೆ ಮಾಡಿ ಎಂಜಿನಿಯರಿಂಗ್ ಮಾಡುವ ಕನಸು. ನಾಳೆಯಿಂದ ಕಾಲೇಜು ಪ್ರಾರಂಭವಾಗುತ್ತದೆ. ಆ ರಾತ್ರಿ, ರಾಣಿಗೆ ನಿದ್ರೆ ಬರಲಿಲ್ಲ. ಹೊಸ ಕಾಲೇಜು ಹೇಗಿರುತ್ತೆ, ಸ್ನೇಹಿತರು ಹೇಗಿರುತ್ತಾರೆ? ನಾನು ಸೈನ್ಸ್ ಓದಬಹುದೇ? ಇಷ್ಟು ದಿನ ಕನ್ನಡದಲ್ಲಿ ಓದಿದ ರಾಣಿಗೆ, ಮುಂದೆ ಎಲ್ಲಾ ವಿಷಯಗಳು ಇಂಗ್ಲಿಷ್‌ನಲ್ಲಿ ಇರುವುದರಿಂದ ಅರ್ಥವಾಗುತ್ತಾ ಎಂಬ ಭಯ.   ಅಮ್ಮನಿಗೆ ಸಂಬಂಧಿಕರು - "ಅಷ್ಟು ಹೆಣ್ಣುಮಕ್ಕಳನ್ನು ಯಾಕೆ ಓದಿಸುತ್ತೀರಾ, ಗಂಡು ಸಿಗೋದು ಕಷ್ಟ," ಎಂದವರು. ಅಮ್ಮನಿಗೆ ಭಯ ಮತ್ತು ಆಶಾಭಾವನೆಗಳ ಮಿಶ್ರ ಭಾವನೆಗಳಾಗಿದ್ದವು. ಅಪ್ಪನಿಗೆ ಹಣದ ಯೋಚನೆ. ನೂರು ಜನ ನೂರು ಮಾತನಾಡಿದ್ದರು. ಹೀಗೆ ಯೋಚಿಸುತ್ತಾ ಮಲಗಿದ ರಾಣಿ, ಯಾವಾಗ ನಿದ್ರೆ ಬಂತೋ ಗೊತ್ತಾಗಲಿಲ್ಲ. ಅಮ್ಮ ದೇವಕಿ ಬಂದು ಎಬ್ಬಿಸಿದಾಗ ಎಚ್ಚರವಾದಳು. ಬೇಗನೆ ಬ್ರಶ್ ಮಾಡಿ ಸ್ನಾನ ಮುಗಿಸಿ ತಯಾರಾದಳು. ಅಪ್ಪ ಶಿವಪ್ಪ  ಆಗಲೇ ಬೈಯಲಾರಂಭಿಸಿದರು ಹೀಗೆ ನಿದ್ದೆ ಮಾಡಿದರೆ  ಸೈನ್ಸ್ ಓದುವುದು ಸುಲಭವಲ್ಲ" ಎಂದು ಹೇಳಿದರು. ಹೊಸ ಕಾಲೇಜಿಗೆ ಸೇರಿದ ಕಾರಣ, ಅಪ್ಪ ಹಾಸ್ಟೆಲ್‌ಗೆ ಸೇರಿಸಲು ಜೊತೆಗೆ ಬಂದರು. ಅಮ್ಮನ ಮುಖದಲ್ಲಿ ಖುಷಿ ಮತ್ತು ಒಂದು ಕಡೆ ಭಯ ಕಂಡುಬಂದಿತ್ತು. ತಂಗಿ ರಾಮ್ಯಾಗೆ ಬೈ ಹೇಳಿ ಹೊರಟೆವು. ಮುಂದುವರೆಯುವುದು.....

ಕಠಿಣತೆ ಮತ್ತು ಪ್ರೀತಿಯ ಸಮನ್ವಯ

 ನನ್ನ ಬಾಲ್ಯದಲ್ಲಿ ನನ್ನ ತಂದೆ ಎತ್ತಿ ಆಡಿಸಿದ ನೆನಪು ನನ್ನಾಗಿಲ್ಲ.ಅವರು ಎಂದೂ ನನ್ನನ್ನು ಶಾಲೆಗೆ, ಅಂಗಡಿಗೆ ಕರೆದೊಯ್ಯಲಿಲ್ಲ. ನಾನು ಕೆಲಸ ಮಾಡದೇ ಇದ್ದರೆ, ಅವರು ನನ್ನನ್ನು ಗದರಿಸುತ್ತಿದ್ದರು.  ಆದರೆ ಈಗ ಎಲ್ಲವೂ ಬದಲಾಗಿದೆ.ಅಂದಿನ ಕಠಿಣ ತಂದೆ, ಇಂದಿನ ಮೃದುವಾದ ಅಜ್ಜ. ಅವರು ನನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಾರೆ, ಅವರೊಂದಿಗೆ ಆಡುತ್ತಾರೆ, ಮತ್ತು ಮಗುವಿನಂತೆಯೇ ಹೆಬ್ಬಾಗಿಲುಗಳಲ್ಲಿ ನಕ್ಕು ನಲಿಯುತ್ತಾರೆ. ಆದರೆ ಈ ಸಮಯದಲ್ಲಿ ನನಗೆ ಅರ್ಥವಾಗದಿದ್ದುದೇನಂದರೆ, ಅವರ ಕಠಿಣ ಮಾತುಗಳ ಹಿಂದೆ ಅಡಗಿರುವ ಅವರ ಪ್ರೀತಿ ಮತ್ತು ಸಂಕಲ್ಪ. ಅವರು ನನ್ನನ್ನು ಸ್ವಾವಲಂಬನೆ, ಶ್ರದ್ಧೆ, ಶ್ರಮಪರವಾಗಿರಲು ಕಲಿಸುತ್ತಿದ್ದರು. ಆದರೆ, ಈ ಕಥೆಯ ಹಿಂದೆ ಇದ್ದಂತೆಯೇ ಇದೆ – ತಂದೆಮಕ್ಕಳ ಮೇಲಿನ ಪ್ರೀತಿ ದಪ್ಪ ನೋಟು ಅಥವಾ ತಿರಸ್ಕಾರವಲ್ಲ, ಅದು ಅವರನ್ನು ಅವರ ಕಾಲಿನ ಮೇಲೆ ನಿಲ್ಲಿಸಲು ಮತ್ತು ಜವಾಬ್ದಾರಿಯುತವಾಗಿ ಬದುಕು ಕಟ್ಟಿಕೊಡಲು ಪ್ರಯತ್ನಿಸುವ ಹೃದಯದ ಮಾತು. ಅವರ ಹಿಟ್ಲರ್ ಹೋಲಿಕೆಯ ಕಠಿಣ ಕಣ್ಣಲ್ಲಿ, ನಾನಿಂದು ನನ್ನ ಸ್ವಾವಲಂಬನೆಯ ಬದುಕು.  My Favorite Reading Resources As an avid reader, I love exploring different genres and discovering new books. One of my favorite places to find book recommendations and discussions is [this Tumblr page on books and reading](...

ಮುಗ್ಧತೆ ಮತ್ತು ಬದುಕಿನ ಪಾಠ

 ಸರಳಾ, ಮುಗ್ಧ ಸ್ವಭಾವದ ಅಂತರ್ಮುಖಿ ಹುಡುಗಿ. ಶಾಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಬುದ್ಧಿವಂತಿಕೆಯೊಂದಿಗೆ, ಮನೆಯಲ್ಲಿದ್ದಾಗಲೆಲ್ಲಾ ಅವಳು ಪುಸ್ತಕಗಳ ಜಗತ್ತಿನಲ್ಲಿ ಮುಳುಗಿ ಹೋಗುತ್ತಿದ್ದಳು. ಅವಳಿಗೆ ಬೇಸರವೂ ಇಲ್ಲ, ಕಷ್ಟವೂ ಇಲ್ಲ – ಹೀಗೆ ತನ್ನ ಶಾಂತ ಜೀವನದಲ್ಲಿಯೇ ತೃಪ್ತಿಯಿದ್ದಳು. ಅವಳಿಗೆ ಯಾವ ಸಹಾಯ ಬೇಕಾದರೂ, ಸ್ವತಃ ಅದನ್ನು ಪಡೆದುಕೊಂಡುಬಿಡುತ್ತಿದ್ದಳು; ಓದು ಅಥವಾ ಬೇರೆ ಯಾವುದೇ ಅಗತ್ಯಗಳಾದರೂ. ಆದರೆ, ಇತರರಿಗೆ ಸಹಾಯ ಮಾಡಬೇಕೆಂದರೆ, ಸರಳಾ ಯಾವಾಗಲೂ ಸಿದ್ದವಾಗಿದ್ದಳು. ಜನರು ಅವಳ  ಮುಗ್ಧತೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಅವಳ ತಾಳ್ಮೆ ಮತ್ತು ನಿಷ್ಕಪಟತೆಯ ಲಾಭ ಪಡೆಯುತ್ತಾ, ಜನರು ಅವಳನ್ನು ಬಳಸಿಕೊಳ್ಳುತ್ತಿರುವುದನ್ನು ಸರಳಾ ನಿಧಾನವಾಗಿ ಅರಿತುಕೊಳ್ಳುತ್ತಿದಂತೆ, ಅವಳ ಮನಸ್ಸಿನಲ್ಲಿ ಚೂರು ನೋವು ಉಂಟಾಯಿತು. "ನಾನು ಎಲ್ಲರಿಗೂ ಸಹಾಯ ಮಾಡುತ್ತಿದ್ದೇನೆ,ಆದರೆ ನನಗೆ ಅಗತ್ಯವಿದ್ದಾಗ ಯಾರೂ ಸಹಾಯ ಮಾಡುತ್ತಿಲ್ಲ.ಈ ವಿಚಾರವು ಅವಳ ಮನಸ್ಸಿನಲ್ಲಿ ಆಳವಾಗಿ ನಾಟಿಕೊಂಡಿತು. ಅಂತಿಮವಾಗಿ, ಸರಳಾ ತನ್ನ ಸುತ್ತಲಿನ ಪ್ರಪಂಚದ ವಾಸ್ತವವನ್ನು ಅರ್ಥಮಾಡಿಕೊಂಡಳು. ಯಾವುದೇ ಪರಿಗಣನೆಯಿಲ್ಲದೆ ಜನರು ತಮ್ಮ ಲಾಭಕ್ಕಾಗಿ ಇತರರನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅವಳು ಅರಿತುಕೊಂಡಳು. ಇನ್ಮುಂದೆ, ಅವಳು ಸಹಾಯ ಮಾಡುವಾಗ ಮಿತಿಯ ಅರ್ಥವನ್ನು ತಿಳಿಯುತ್ತಿದ್ದಳು. ಅವಳು ಅಂತರ್ಮುಖಿಯಾಗಿದ್ದರೂ, ಅವಳೊಳಗಿನ ಬಲವು ಈಗ ಸ್ಪ...

ಒಂದು ಗುರಿ ಕನಸಿನ ಯಶಸ್ಸು

 ರಾಜಶೇಖರ್ ಅವರ ಜೀವನ ಅನುಭವ  ಅತ್ಯಂತ ವೈವಿಧ್ಯದಿಂದ  ಕೂಡಿತ್ತು. ಪ್ರತಿ ಬಾರಿಗೆ ಹೊಸತನದ ಹುಡುಕಾಟದಲ್ಲಿ, ನೂರು ಕೆಲಸ ಮಾಡಿದ್ದರು.22ನೇ ವಯಸ್ಸಿನಲ್ಲಿ ಅವರು ಕಾರ್ಯನಿರ್ವಾಹಕರಾಗಿ ವೃತ್ತಿ ಆರಂಭಿಸಿದರು. ಎಲ್ಲವೂ ಚೆನ್ನಾಗಿಯೇ ಹೋಗುತ್ತಿದೆ ಎಂದು ಭಾವಿಸುತ್ತಿರುವಾಗ, ಅಲ್ಪಕಾಲದಲ್ಲೇ ಅವರು ಆ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ತಕ್ಷಣವೇ, 23ನೇ ವಯಸ್ಸಿನಲ್ಲಿ ಕಚೇರಿ ಸಹಾಯಕನಾಗಿ ಕೆಲಸಕ್ಕೆ ಸೇರಿದರು, ಆದರೆ ಅಷ್ಟರಲ್ಲಿ ಮನಸ್ಸು ಮತ್ತೊಮ್ಮೆ ಮತ್ತೊಂದು ಕೆಲಸಕ್ಕೆ ಆಸಕ್ತಿ ತೋರಿಸಿತು.24ನೇ ವಯಸ್ಸಿನಲ್ಲಿ ರಾಜಶೇಖರ್ ಮನೆ ಪೇಂಟಿಂಗ್ ಉದ್ಯಮ ಪ್ರಾರಂಭಿಸಿದರು. ಅವರು ಅವರ ಕೈಯಲ್ಲಿ ಬ್ರಷ್ ಹಿಡಿದು ಆಕರ್ಷಕ ಬಣ್ಣಗಳಿಂದ ಮನೆಗಳನ್ನು ಸುಂದರಗೊಳಿಸುತ್ತಿದ್ದರು. ಆದರೂ, ಕೆಲವೇ ತಿಂಗಳಲ್ಲಿ ಪೇಂಟಿಂಗ್ ಕೆಲಸವು ರಾಜಶೇಖರ್‌ಗಾಗಿ ಸ್ವಲ್ಪ  ಬೇಸರವಾಗಲು , ಮತ್ತೆ ಹೊಸತನದ ಹುಡುಕಾಟ ಆರಂಭವಾಯಿತು.25ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ, ತಮ್ಮಮಾವನ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದರು. ಈ ಬಾರಿ ರಾಜಶೇಖರ್ ಅವರಿಗೆ ಭಿನ್ನವಾದ ಜೀವನ ಶೈಲಿಯನ್ನು ಅನುಭವಿಸಿದರು. ಆದರೆ ಅದು ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ದಿನಸಿ ಅಂಗಡಿಯನ್ನು ಪ್ರಾರಂಭಿಸಲು ಅವರು ತಮ್ಮ ನಗರಕ್ಕೆ ಮರಳಿ, 26ನೇ ವಯಸ್ಸಿನಲ್ಲಿ ಒಂದು ವರ್ಷ ತೀವ್ರ ಪರಿಶ್ರಮದಿಂದ ಕೆಲಸ ಮಾಡಿದರು. ಆದರೂ, ವ್ಯಾಪಾರದಲ್ಲೂ ಆನಂದವಿಲ್ಲದಿದ್ದಾಗ, ಅವರು ಅದನ್ನೂ ಮುಚ್ಚಬೇಕಾಯಿತ...